ಉಪ್ಪಳ: ಕೈಕಂಬ ಪೇಟೆಯಲ್ಲಿ ಚರಂಡಿ ನಿರ್ಮಿಸಲು ತೋಡಿದ ಹೊಂಡಕ್ಕೆ ಭದ್ರತೆಯಿಲ್ಲದೆ ಅಪಘಾತದಿಂದ ಭೀತಿ ಸೃಷ್ಟಿಯಾಗಿದೆ. ಹೆದ್ದಾರಿ ಅಭಿವೃದ್ದಿ ಕಾಮಗಾರಿ ಹಿನ್ನೆಲೆಯಲ್ಲಿ ಕೈಕಂಬ ಪೇಟೆಯಲ್ಲಿ ಚರಂಡಿ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಹೊಂಡಕ್ಕೆ ಸುತ್ತು ಭದ್ರತೆ ಒದಗಿಸದಿರುವುದು ವಾಹನ ಸವಾರರಲ್ಲಿ ಆತಂಕಕ್ಕೆ ಕಾರಣಾಗಿದೆ. ಬಾಯಾರು ರಸ್ತೆ ಸಂಗಮಿಸುವ ಜನನಿಬಿಡ ಪ್ರದೇಷದಲ್ಲಿ ಬೃಹತ್ ಹೊಂಡ ತೋಡಲಾಗಿದೆ. ಈ ಹೊಂಡ ಅಪಘಾತಕ್ಕೆ ಕಾರಣವಾಗುತ್ತಿರುವುದಾಗಿ ಸಾರ್ವಜನಿಕರು ದೂರಿದ್ದಾರೆ.
ಈ ಪರಿಸರದಲ್ಲಿ ಉಪ್ಪಳದಿಂದ ಬಾಯಾರು ಹಾಗೂ ಬಾಯಾರಿಂದ ಉಪ್ಪಳ ಭಾಗಕ್ಕೆ ತೆರಳುವ ಬಸ್ಗಳ ನಿಲುಗಡೆ ಹಾಗೂ ಇತರ ವಾಹನಗಳ ಸಂಚಾರಕ್ಕೆ ತೊಡಕು ಉಂಟಾಗುತ್ತಿದೆ. ಇಕ್ಕಟ್ಟಾದ ರಸ್ತೆ ಪರಿಸರದಲ್ಲಿ ಹೊಂಡಕ್ಕೆ ಸುತ್ತು ತಡೇ ಬೇಲಿ ಅಳವಡಿಸದೆ ಇರುವುದು ವಾಹನ ಸಹಿತ ಜನ ಸಂಚಾರಕ್ಕೂ ಅಪಾಯಕಾರಿಯಾಗಿದ್ದು, ಭದ್ರತೆ ಒದಗಿಸಬೇಕೆಂದು ಜನಕೀಯ ವೇದಿ ಮಂಗಲ್ಪಾಡಿ ಸಮಿತಿ ಒತ್ತಾಯಿಸಿದೆ.