ಬಿರುವೆರ್ ಕುಡ್ಲ ಮಂಜೇಶ್ವರ ತಾಲೂಕು ಘಟಕದ ಪದಾಧಿಕಾರಿಗಳ ಆಯ್ಕೆ

Share with

ಮಂಜೇಶ್ವರ: ಫ್ರೆಂಡ್ಸ್ ಬಳ್ಳಾಲ್ಬಾಗ್ ಬಿರುವೆರ್ ಕುಡ್ಲ ಸಂಘಟನೆಯ ಘಟಕವಾದ ಬಿರುವೆರ್ ಕುಡ್ಲ ಮಂಜೇಶ್ವರ ತಾಲೂಕಿನ ಮಹಾಸಭೆಯು  ಬ್ರಹ್ಮ ಶ್ರೀ ನಾರಾಯಣ ಗುರು ಸ್ವಾಮಿ ಮಂದಿರ ಅಂಬಾರು ಚೆರುಗೋಳಿಯಲ್ಲಿ ನಡೆಯಿತು. ಸಭೆಯಲ್ಲಿ ಸಂಸ್ಥಾಪಕ ಪದಾಧಿಕಾರಿಗಳ ಆಯ್ಕೆಯನ್ನು ನೇಮಕಮಾಡಲಾಯಿತು. ಗೌರವಾಧ್ಯಕ್ಷರು ಮತ್ತು ಸಲಹೆಗಾರರಾಗಿ  ಶೀನಪ್ಪ ಪೂಜಾರಿ ಅಲಾರು, ಅಧ್ಯಕ್ಷರಾಗಿ ಉದಯ್ ಕುಮಾರ್ ಅಮ್ಮೇರಿ, ಉಪಾಧ್ಯಕ್ಷರಾಗಿ ಶೋಭಾ  ಅಮೀನ್ ಕುಂಬ್ಳೆ, ದಿನೇಶ್ ಪೂಜಾರಿ ಕಾಡಾಪು, ಪ್ರಧಾನ  ಕಾರ್ಯದರ್ಶಿ ಅನಿಲ್ ಕುಮಾರ್ ಪ್ರತಾಪನಗರ, ಜತೆ . ಕಾರ್ಯದರ್ಶಿಗಳಾದ
ಹರಿಣಿ ಪ್ರತಾಪ ನಗರ, ಸತೀಶ್ ವರ್ಕಾಡಿ, ರಿತೇಶ್ ಅಂಚನ್ ಕುಲಶೇಖರ , ಕೋಶಾಧಿಕಾರಿಯಾಗಿ ಸಚಿನ್ ಅಂಬಾರು ಹಾಗೂ ೧೯ ಸದಸ್ಯರ ಕಾರ್ಯಕಾರಿ ಸಮಿತಿಯನ್ನು ರಚನೆ ಮಾಡಲಾಯಿತು. ಸಭೆಯಲ್ಲಿ ತಾಲೂಕಿನಲ್ಲಿರುವ ಹಿಂದುಳಿದ ಬಡಜನರಿಗೆ  ಮತ್ತು ಆರೋಗ್ಯಪೀಡಿತರಿಗೆ ಸಹಾಯಹಸ್ತ ಮತ್ತು ಬಡ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಬೇಕಾದ  ಆರ್ಥಿಕ ನೆರವು ನೀಡುವ ಯೋಜನೆಯ ಬಗ್ಗೆ ತೀರ್ಮಾನಿಸಲಾಯಿತು


Share with

Leave a Reply

Your email address will not be published. Required fields are marked *