ಹಿರಿಯ ಕಾಂಗ್ರೇಸ್ ಮುಖಂಡ ನಿಧನ

Share with

Senior Congress leader passes away

ಮಂಜೇಶ್ವರ: ಹಿರಿಯ ಕಾಂಗ್ರೇಸ್ ಮುಖಂಡ, ವ್ಯಾಪಾರಿ ವರ್ಕಾಡಿ ಮಜೀರ್ಪಳ್ಳ ನಿವಾಸಿ ಕೆ.ಕೆ ಜಾಯಿರನ್ [95] ಹಲವು ದಿನಗಳ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಇವರು ಹಲವು ವರ್ಷಗಳ ಕಾಲ ಮಜೀರ್ಪಳ್ಳದಲ್ಲಿ ಬಟ್ಟೆ ವ್ಯಾಪಾರಿಯಾಗಿದ್ದರು. ಕಾಂಗ್ರೇಸ್‌ನ ಹಿರಿಯ ಮುಖಂಡರು, ಗಾಂಧಿವಾದಿ, ಸಮಾಜ ಸೇವಕರೂ ಆಗಿದ್ದರು. ಮೃತರು ಮಕ್ಕಳಾದ ಚಂದ್ರಕಲಾ, ಪ್ರಭಾಕರ.ಕೆ, ದಿವಾಕರ.ಎಸ್.ಜೆ, ಶಶಿಕಲಾ, ಸೊಸೆಯಂದಿರಾದ ಶಕೀಲ, ಮಮತಾ [ ಜಿಲ್ಲಾ ಪಂಚಾಯತ್ ಮಾಜಿ ಸ್ಥಾಯೀ ಸಮಿತಿ ಅಧ್ಯಕ್ಷೆ] , ಅಳಿಯ ಬಿ.ಎಂ ಶ್ರೀನಿವಾಸ, ಸಹೋದರ ನಾರಾಯಣ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಪತ್ನಿ ಸೀತಮ್ಮ, ಅಳಿಯ ಸುಕುಮಾರ ಈ ಹಿಂದೆ ನಿಧನರಾಗಿದ್ದಾರೆ. ಮೃತರ ಮನೆಗೆ ವಿವಿಧ ರಾಜಕೀಯ ನೇತಾರರು, ಕಾರ್ಯಕರ್ತರು, ವ್ಯಾಪಾರಿಗಳ ಸಹಿತ ಹಲವಾರು ಮಂದಿ ಭೇಟಿ ನೀಡಿ ಸಂತಾಪ ಸೂಚಿಸಿದರು.


Share with

Leave a Reply

Your email address will not be published. Required fields are marked *