ಚೆರುವೋಳು ಶ್ರೀ ವಿಷ್ಣುಕೃಪಾ ವೀರಾಂಜನೇಯ ವ್ಯಾಯಾಮ ಶಾಲೆಯಲ್ಲಿ ಶ್ರೀ ವೀರಾಂಜನೇಯ ದೇವರ ನೂತನ ಛಾಯಾಫಲಕ

Share with

ಹೇರೂರು: ಚೆರುವೋಳು ಅಕ್ಷಯನಗರದ ಶ್ರೀ ವಿಷ್ಣುಕೃಪಾ ವೀರಾಂಜನೇಯ ವ್ಯಾಯಾಮ ಶಾಳೆಯಲ್ಲಿ ಶ್ರೀ ವೀರಾಂಜನೇಯ ದೇವರ ನೂತನ ಛಾಯಾಫಲಕ ಪುನ: ಪ್ರತಿಷ್ಟೆ ಮತ್ತು ಶ್ರೀ ಮಾರುತಿ ಕಲ್ಪೋಕ್ತ ಪೂಜೆ ಎ.೨೧ ಮತ್ತು೨೨ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ೨೧ರಂದು ರಾತ್ರಿ ೭ರಿಂದ ವಿವಿಧ ವೈಧಿಕ ಕಾರ್ಯಕ್ರಮ, ೨೨ರಂದು ಬೆಳಿಗ್ಗೆ ೬.೩೦ಕ್ಕೆಶ್ರೀ ಮಹಾಗಣಪತಿ ಹೋಮ, ಪ್ರತಿಷ್ಟಾ ಹೋಮ, ೮.೩೨ಕ್ಕೆ ನೂತನ ಛಾಯಾಫಲಕ ಪ್ರತಿಷ್ಟೆ, ೧೦.೩೦ರಿಂದ ಮಾರುತಿ ಕಲ್ಪೋಕ್ತ ಪೂಜೆ, ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಮಧ್ಯಾಹ್ನ ೨ರಿಂದ ಸಂಜೆ ೬.೩೦ರ ತನಕ ವಿವಿಧ ಭಜನಾ ತಂಡಗಳಿoದ ಭಜನೆ, ಮಂಗಳ ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ ೭ರಿಂದ ಊರ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ೮.೩೦ರಿಂದ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡುವರು. ಶ್ರೀನಾಥ್ ಭಟ್, ತಾಡ ಚಿದಾನಂದ ಮಯ್ಯ, ಹೇರೂರು ವಿವೇಕಾನಂದ ಶೆಟ್ಟಿ, ಲಕ್ಷಿ ನಾರಾಯಣ ನಾಯ್ಕ್ ಹೇರೂರು, ಸುಂದರ ಬೆಳ್ಚಪ್ಪಾಡ ಚೆರುವೋಳು, ಮೃತ್ಯುಂಜಯ ಐಲ, ನಾರಾಯಣ.ಜಿ ಜಾರಮುಗೇರು ಮೊದಲಾದವರು ಉಪಸ್ಥಿತರಿರುವರು. ರಾತ್ರಿ ೯.೩೦ಕ್ಕೆ ಅನ್ನಪ್ರಸಾದ ನಡೇಯಲಿದೆ.


Share with

Leave a Reply

Your email address will not be published. Required fields are marked *