ಅಂಬಾರು ಶ್ರೀ ಸ್ವಾಮಿ ಕೊರಗಜ್ಜ ಸನ್ನಿಧಿಯಲ್ಲಿ ದೈವಗಳ ಪ್ರತಿಷ್ಟಾ ಕಲಶಾಭಿಷೇಕ ಮತ್ತು ಕೋಲ ಎ.೨೦ರಿಂದ

Share with

Pratishtha Kalashabhishekam of Gods in the presence of Ambaru

ಉಪ್ಪಳ: ಅಂಬಾರು ಶ್ರೀ ಸ್ವಾಮಿ ಕೊರಗಜ್ಜ ಸನ್ನಿಧಿಯಲ್ಲಿ ಶ್ರೀ ಕೊರಗ ತನಿಯ ಹಾಗೂ ಗುಳಿಗ ದೈವದ ಪ್ರತಿಷ್ಟಾ ಕಲಶಾಭಿಷೇಕ ಮತ್ತು ಶ್ರೀ ಕೊರಗಜ್ಜ ದೈವದ ಕೋಲ ಈ ತಿಂಗಳ ೨೦ ಮತ್ತು ೨೧ರಂದು ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ವೇದಮೂರ್ತಿ ವಾಸುದೇವ ಹೊಳ್ಳ ಅಂಬಾರು ಇವರ ನೇತೃತ್ವದಲ್ಲಿ ನಡೆಯಲಿದೆ. ೨೦ರಂದು ಸಂಜೆ ೫.೩೦ಕ್ಕೆ ಆಚಾರ್ಯ ,ಋತ್ವಿಜರ ಆಗಮನ, ೬ಕ್ಕೆ ಪ್ರಾರ್ಥನೆ, ರಾತ್ರಿ ೯ಕ್ಕೆ ವಿವಿಧ ವೈಧಿಕ ಕಾರ್ಯಕ್ರಮ, ೨೧ರಂದು ಬೆಳಿಗ್ಗೆ ೯ಕ್ಕೆ ಗಣಪತಿ ಹವನ, ಕಲಶ ಪೂರ್ಣ, ಆದಿವಾಸ ಹೋಮ, ೧೦.೩೦ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡುವರು. ಅಂಬಾರು ಶ್ರೀ ಕೊರಗಜ್ಜ ಸೇವಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಸತ್ಯವತಿ ನಾರಾಯಣ ಅಂಬಾರು ಅಧ್ಯಕ್ಷತೆ ವಹಿಸುವರು. ಈ ಸಂದರ್ಭದಲ್ಲಿ ದೈವ ಸೇವಕರನ್ನು ಸನ್ಮಾನಿಸಲಾಗುವುದು. ೧೧.೫೦ಕ್ಕೆ ಶ್ರೀ ಕೊರಗ ತನಿಯ ದೈವಕ್ಕೆ ನವಕ ಕಲಶಾಭಿಷೇಕ ಮತ್ತು ಶ್ರೀ ಗುಳಿಗ ದೈವಕ್ಕೆ ಪಂಚ ಕಲಶಾಭಿಷೇಕ, ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ೫.೩೦ಕ್ಕೆ ಗುಳೀಗ ದೈವಕ್ಕೆ ತಂಬಿಲ ಸೇವೆ, ರಾತ್ರಿ ೭ಕ್ಕೆ ಭಂಡಾರ ತೆಗೆಯುವುದು, ೭.೩೦ಕ್ಕೆ ಅನ್ನಸಂತರ್ಪಣೆ, ರಾತ್ರಿ ೮ಕ್ಕೆ ಶ್ರೀ ಕೊರಗ ತನಿಯ ದೈವದ ಕೋಲ, ೧೧ಕ್ಕೆ ಪ್ರಸಾದ ವಿತರಣೆ ನಡೆಯಲಿದೆ.


Share with

Leave a Reply

Your email address will not be published. Required fields are marked *