ಉಡುಪಿ: ಸಿಡಿಲು ಬಡಿದು ಯುವಕನೋರ್ವ ಸಾವನಪ್ಪಿದ ಘಟನೆ ಕಾಂತಾವರದಲ್ಲಿ ಶನಿವಾರ ಸಂಭವಿಸಿದೆ.
ಪಾಲಡ್ಕ ನಿವಾಸಿ ನಿತಿನ್ ಪೂಜಾರಿ (24) ಮೃತದುರ್ದೈವಿ. ಇಂದು ಮುಂಜಾನೆ 5.30 ರಿಂದ 6.30ರ ಮಧ್ಯಾವಧಿಯಲ್ಲಿ ಕೇಪ್ಲಾಜೆ ಮಾರಿಗುಡಿ ಸಮೀಪ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ ಎಂದು ತಿಳಿದುಬಂದಿದೆ.