ಪಟ್ಲ ಬೆಟ್ಟದಲ್ಲಿ ಬೈಕರ್ಸ್ ಮೇಲೆ ಗೂಂಡಾಗಿರಿ..! ಒಂದೇ ದಿನದಲ್ಲಿ ಗೂಂಡಾಗಳ ಬಂಧಿಸಿದ ಪೊಲೀಸರು..!

Share with

ಸಕಲೇಶಪುರ ಪಟ್ಲ ಬೆಟ್ಟದಲ್ಲಿ ಬೈಕರ್ಸ್ ಮೇಲೆ ಪಿಕಪ್ ಚಾಲಕರ ಗೂಂಡಾಗಿರಿ ಕುರಿತಾದ ವಿಡಿಯೊ ಕೆಲ ದಿನದ ಹಿಂದೆ ವೈರಲ್ ಆಗಿತ್ತು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

ಸಕಲೇಶಪುರದಲ್ಲಿ ಶಾಸಕ ಸಿಮೆಂಟ್ ಮಂಜುನಾಥ್ ರವರು ಪಟ್ಲ ಬೆಟ್ಟದ ಗೂಂಡಾಗಿರಿ ಕುರಿತು ಜೂ. 24 ಕೆ.ಡಿ. ಪಿ ಸಭೆಯಲ್ಲಿ ಪ್ರಸ್ತಾಪಿಸಿದ್ದರು. ಯಸಳೂರು ಪೋಲಿಸ್ ಹಾಗೂ ಅರಣ್ಯ ಇಲಾಖೆಯವರಿಗೆ ಈ ಘಟನೆ ಬಗ್ಗೆ ಕ್ರಮಕೈಗೊಳ್ಳುವಂತೆ ಸೂಚಿಸಿ ಒಂದು ದಿನವೂ ಕಳೆದಿಲ್ಲ.

ಪಟ್ಲಬೆಟ್ಟದ ಗೂಂಡಾಗಿರಿ ಪ್ರಕರಣದಲ್ಲಿ ನಾಲ್ವರು ಪಿಕಪ್‌ ಚಾಲಕರನ್ನು ಪೊಲೀಸರು ಬಂಧಿಸಿದ್ದಾರೆ.

ಸಕಲೇಶಪುರ ತಾಲೂಕಿನ ಪಟ್ಲ ಬೆಟ್ಟದಲ್ಲಿ ಬೈಕರ್‌ ಗಳ ಮೇಲೆ ನಡೆದ ಹಲ್ಲೆ ನಂತರದ ಸಾಮಾಜಿಕ ಜಾಲತಾಣದಲ್ಲಿ ಭುಗಿಲೆದ್ದ ಆಕ್ರೋಶದಿಂದ ಎಚ್ಚೆತ್ತ ಅರಣ್ಯ ಇಲಾಖೆ ಬೆಟ್ಟಕ್ಕೆ ವಾಹನಗಳು ತೆರಳದಂತೆ ಮಂಗಳವಾರ ರಸ್ತೆ ಬಂದ್‌ ಮಾಡಿದೆ.

ಸ್ಥಳೀಯ ಪಿಕಪ್‌ ಚಾಲಕರಾದ ಮದನ್‌, ಗಗನ್‌, ನಿಶಾಂತ್‌, ಕಿರಣ್‌ ಬಂಧಿತರು. ಹಲ್ಲೆಗೊಳಗಾದ ಬೈಕರ್‌ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು.

ರಸ್ತೆ ಬಂದ್:‌ ಇದೆಲ್ಲ ವಿವಾದಗಳಿಂದ ಎಚ್ಚೆತ್ತ ಅರಣ್ಯ ಇಲಾಖೆ ಅಧಿಕಾರಿಗಳು ಮಂಗಳವಾರ ಜೆಸಿಬಿ ಬಳಸಿ ಬೆಟ್ಟಕ್ಕೆ ಹೋಗುವ ದಾರಿಯಲ್ಲಿ ಟ್ರಂಚ್‌ ನಿರ್ಮಾಣ ಮಾಡಿದ್ದಾರೆ. ಇದರಿಂದ ಇನ್ನು ಮುಂದೆ ಯಾವುದೇ ವಾಹನಗಳು ಪಟ್ಲಬೆಟ್ಟಕ್ಕೆ ಹೋಗಲು ಸಾಧ್ಯವಿಲ್ಲದಂತಾಗಿದೆ.

ಈ ಹಿಂದೆಯೂ ಅರಣ್ಯ ಇಲಾಖೆ ಪಟ್ಲಬೆಟ್ಟಕ್ಕೆ ವಾಹನ ಸಂಚಾರ ನಿಷೇಧಿಸಿ ದಾರಿ ಬಂದ್‌ ಮಾಡಿತ್ತು. ಆಗ ಸ್ಥಳೀಯ ರಾಜಕೀಯ ಮುಖಂಡರಿಗೆ ದುಂಬಾಲು ಬಿದ್ದಿದ್ದ ಪಿಕಪ್‌ ಚಾಲಕರು ವಾಹನ ಸಂಚಾರಕ್ಕೆ ಅವಕಾಶ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.

ಆದರೆ ಇದರ ಕುರಿತು ನಿನ್ನೆ(ಜೂ.26) ಶಾಸಕರು ಸಿಮೆಂಟ್ ಮಂಜು ಅವರು ಕೆ ಡಿ ಪಿ ಮೀಟಿಂಗ್ ನಲ್ಲಿ ಪ್ರಸ್ತಾಪಿಸಿ ಪಟ್ಲ ಬೆಟ್ಟದಲ್ಲಿ ಬೇಕಾಬಿಟ್ಟಿ ದುಡ್ಡನ್ನು ಅರಣ್ಯ ಇಲಾಖೆ ವಸೂಲಿ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ನಮ್ಮ ಸಕಲೇಶಪುರ ನಡೆಯುತ್ತಿರುವುದೇ ಪ್ರವಾಸಿಗರ ಬರುವಿಕೆಯಿಂದ ಯಾಕೆ ಅವರನ್ನು ಕಾಡು ಹಾಗು ಪಟ್ಲ ಬೆಟ್ಟಕ್ಕೆ ಹೋಗುವವರಿಗೆ ತೊಂದರೆ ಕೊಡುತ್ತಿದ್ದೀರಾ ಎಂದು ಪ್ರಶ್ನಿಸಿದ್ದರು. ಹಾಗೆ ಯಸಳೂರಿನ ಕಾಡಿನ ಬಳಿ ಕೂಡ ಯಾರ ಪರ್ಮಿಶನ್ ಕೂಡ ಇಲ್ಲದೆ ದೊಡ್ಡ ಗುಂಡಿಯನ್ನು ತೋಡಿದ್ದೀರಾ? ಎಂದು ಕೇಳಿದರೆ ಹುಡುಗರು ಇಲ್ಲಿ ಬರುತ್ತಾರೆ ಎಂದು ನೆಪ ಒಡ್ಡುತ್ತಿರಾ ಎಂದು ಹೇಳಿದ್ದಾರೆ.

ಇವಾಗ ಪುನಃ ಅದೇ ತಪ್ಪನ್ನೇ ಇವರು ಮಾಡಿದ್ದಾರೆ. ಪಟ್ಲ ಬೆಟ್ಟಕ್ಕೆ ಹೋಗುವ ದಾರಿಗೆ ಯಾರು ಹೋಗದಂತೆ ಟ್ರೆಂಚ್ ಹೊಡೆದಿದ್ದಾರೆ. ಇದಕ್ಕೆ ಶಾಸಕರ ಅನುಮತಿ ಇದೆಯೇ ? ಯಾರೋ ಪುಂಡ ಪೋಕರಿಗಳು ಮಾಡಿದಕ್ಕೆ ಪ್ರವಾಸಿಗರಿಗೀಕೆ ಶಿಕ್ಷೆ ? ಅರಣ್ಯ ಇಲಾಖೆ ಗೂಂಡಾಗಿರಿ ಮೇಲೆ ಕ್ರಮಕೈಗೊಳ್ಳಬೇಕು.

ಅರಣ್ಯ ಇಲಾಖೆಯ ಇಂತಹ ಸ್ಥಳೀಯ ಮಟ್ಟದ ತಪ್ಪು ನಿರ್ಧಾರಗಳು ರಾಜ್ಯ ರಾಷ್ಟ್ರ ಮಟ್ಟದಲ್ಲಿ ಸಕಲೇಶಪುರದ ಪ್ರವಾಸೋದ್ಯಮಕ್ಕೆ ಪೆಟ್ಟು ಬೀಳ ಬಲ್ಲುದು. ಇಂತಹ ನಿರ್ಧಾರಗಳು ಇದನ್ನೇ ನಂಬಿಕೊಂಡಿರುವ ರೆಸಾರ್ಟ್ , ಹೋಮ್ ಸ್ಟೇಗಳ ಮೇಲೆಯೂ ಕೂಡ ಪರಿಣಾಮ ಬೀರುತ್ತದೆ ಎಂದು ಶಾಸಕರು ಹೇಳಿದ್ದಾರೆ.


Share with

Leave a Reply

Your email address will not be published. Required fields are marked *