ಕಾಸರಗೋಡು: ಎಲ್ಡಿಎಫ್ ಆಡಳಿತ ನಡೆಸಿದರೂ ಯುಡಿಎಫ್ ಆಡಳಿತ ನಡೆಸಿದರೂ ಕೇರಳದ ಮೀನುಗಾರರಿಗೆ ಟ್ರೋಲಿಂಗ್ ನಿಷೇಧವಿರುವ ತಿಂಗಳುಗಳು ಕಡುಬಡತನದ ಅವಧಿಯಾಗಿದ್ದು, ಪೆನ್ಷನ್ ಹಾಗೂ ರೇಷನ್ ವಿಳಂಬವಾಗುವುದು ಇಲ್ಲಿ ನಿರಂತರ ಘಟನೆಯಾಗಿದೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ಎಂ.ಎಲ್. ಅಶ್ವಿನಿ ಹೇಳಿದರು. ಒಬಿಸಿ ಮೋರ್ಚಾ ಜಿಲ್ಲಾ ಸಮಿತಿ ಹಮ್ಮಿಕೊಂಡಿದ್ದ ಕಾಸರಗೋಡು ಫಿಶರೀಸ್ ಕಚೇರಿ ಧರಣಿಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಸಹಾಯದಿಂದ ನರೇಂದ್ರ ಮೋದಿ ಸರ್ಕಾರವು ಮೀನುಗಾರರ ಸುರಕ್ಷತೆ ಮತ್ತು ಕಲ್ಯಾಣವನ್ನು ಜಾರಿಗೊಳಿಸುತ್ತಿದ್ದರೆ, ರಾಜ್ಯ ಸರ್ಕಾರಕ್ಕೆ ಅವರಿಗೆ ಸಿಗಬೇಕಾದ ಅರ್ಹ ಸೌಲಭ್ಯಗಳನ್ನು ಸಹ ಖಾತರಿಪಡಿಸಲು ಸಾಧ್ಯವಾಗುತ್ತಿಲ್ಲ. 70 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಸರಗೋಡು ಬಂದರಿನ ಅಭಿವೃದ್ಧಿ ಪೂರ್ಣಗೊಂಡರೆ, ಮೀನುಗಾರರು ಇನ್ನಷ್ಟು ಸುರಕ್ಷಿತವಾಗಿ ಮೀನುಗಾರಿಕೆ ನಡೆಸಬಹುದು ಮತ್ತು ಅವರ ಆದಾಯವೂ ಹೆಚ್ಚಾಗಲಿದೆ ಎಂದು ಅಶ್ವಿನಿ ತಿಳಿಸಿದರು.
ಒಬಿಸಿ ಮೋರ್ಚಾ ಜಿಲ್ಲಾ ಅಧ್ಯಕ್ಷರಾದ ಕೆ.ಪಿ. ವತ್ಸರಾಜ್ ಅಧ್ಯಕ್ಷತೆ ವಹಿಸಿದ್ದರು.
ಬಿಜೆಪಿ ರಾಜ್ಯ ಸಮಿತಿ ಸದಸ್ಯರಾದ ವಿ. ರವೀಂದ್ರನ್, ಸತೀಶ್ ಚಂದ್ರ ಭಂಡಾರಿ, ಒಬಿಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಭಗೀಶ್ ಪೂರಾಡನ್, ಕೆ. ಶೈಬು, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್. ಸುನಿಲ್, ಒಬಿಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ ಕುಲಾಲ್, ಒಬಿಸಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷರಾದ ಟಿ.ವಿ. ಮುರಳಿ ಕುಮಾರ್, ಜಿಲ್ಲಾ ಸೆಲ್ ಸಂಯೋಜಕರಾದ ಸುಕುಮಾರ್ ಕುದ್ರೆಪ್ಪಾಡಿ ಹಾಗೂ ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷರಾದ ಕೆ.ಎಸ್. ರಮಣಿ, ಒಬಿಸಿ ಮೋರ್ಚಾ ಕಾಸರಗೋಡು ಮಂಡಲ ಅಧ್ಯಕ್ಷರಾದ ಅಶೋಕ್ ಚೆಟ್ಟಿಯಾರ್ ಮಾತನಾಡಿದರು.




