ಉಪ್ಪಳ: ಮಂಗಲ್ಪಾಡಿ ಪಂಚಾಯತ್ನ ಪೆರಿಂಗಡಿ ಪ್ರದೇಶದಲ್ಲಿ ಕಡಲ್ಕೊರೆತ ವ್ಯಾಪಕಗೊಂಡಿದೆ. ಇದರಿಂದ ಸಮುದ್ರ ತೀರ ರಸ್ತೆ ಹಾಗೂ ಹಲವಾರು ಗಾಳಿ ಮರಗಳು ಸಮುದ್ರ ಪಾಲಾಗಿದೆ. ಬುಧವಾರ ಸಂಜೆ ಮರಗಳು ವಿದ್ಯುತ್ ತಂತಿ ಮೇಲೆ ಬಿದ್ದು ವಿದ್ಯುತ್ ಮೊಟಕುಗೊಂಡಿದೆ. ಸ್ಥಳಕ್ಕೆ ಉಪ್ಪಳ ಅಗ್ನಿ ಶಾಮಕದಳ, ವಿದ್ಯುತ್ ಇಲಾಖೆ ಅಧಿಕಾರಿಗಳು, ವಾರ್ಡ್ ಸದಸ್ಯ ಇಬ್ರಾಹಿಂ ಹಾಗೂ ಊರವರ ಸಹಕಾರದಿಂದ ಮರಗಳನ್ನು ಕಡಿದು ತೆರವುಗೊಳಿಸಲಾಗಿದೆ. ಬಳಿಕ ವಿದ್ಯುತ್ ತಂತಿಯನ್ನು ದುರಸ್ಥಿಗೊಳಿಸಲಾಯಿತು. ಕಡಲ್ಕೊರೆತ ಇದೇ ರೀತಿ ಮುಂದುವರಿದಲ್ಲಿ ರಸ್ತೆ ಪೂರ್ತಿ ನೀರುಪಾಲಾಗಿ ಪರಿಸರದ ಹಲವಾರು ಮನೆಗಳಿಗೂ ಅಪಾಯ ಉಂಟಾಗಲಿದೆ.