ವಿಟ್ಲ ರೋಟರಿ ಕ್ಲಬ್ ಪದಗ್ರಹಣ

Share with

ವಿಟ್ಲ: ವಿಟ್ಲ ರೋಟರಿ ಕ್ಲಬ್ ನ ಪ್ರಸಕ್ತ ವರ್ಷದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು.‌‌ ಪಿಡಿಜಿ ಅಭಿನಂದನ್ ಶೆಟ್ಟಿ ಪದಗ್ರಹಣ ನಡೆಸಿದ ಬಳಿಕ ಮಾತನಾಡಿ ರೋಟರಿ ಕ್ಲಬ್ ಜಗತ್ತಿನ ಉದ್ಧಾರಕ್ಕಾಗಿ ಪಣತೊಟ್ಟ ಅಂತಾರಾಷ್ಟ್ರೀಯ ಸೇವಾ ಸಂಸ್ಥೆಯಾಗಿದ್ದು, ಸಮಾಜಕ್ಕೆ ಮಾನವೀಯ ಮೌಲ್ಯಗಳನ್ನು ತುಂಬಿಸುವ ಜವಾಬ್ದಾರಿ ನಮ್ಮೆಲ್ಲ ಸದಸ್ಯರ ಮೇಲಿದೆ. ಆಶಾವಾದಿಗಳು ಸಂದಿಗ್ಧತೆಗಳ ಮಧ್ಯೆ ಅವಕಾಶವನ್ನು ಹುಡುಕುತ್ತಾರೆ. ಜೀವನದಲ್ಲಿ ನೆನಪಿನಲ್ಲಿಡುವ ಸಾರ್ಥಕ ಕಾರ್ಯ ಮಾಡಿ ಎಂದು ತಿಳಿಸಿದರು .
ಅಂತಾರಾಷ್ಟ್ರೀಯ ಸೇವಾ ಸಂಸ್ಥೆಯ ಗುರಿ ಮತ್ತು ಧ್ಯೇಯೋದ್ದೇಶಗಳನ್ನು ಈಡೇರಿಸಲು ಪ್ರತಿಯೊಬ್ಬರ ಸಹಕಾರ ಅವಶ್ಯಕ ಎಂದು ಜಿಎಸ್ಆರ್ ಜಯಕುಮಾರ್ ತಿಳಿಸಿದರು.
ನೂತನ ಅಧ್ಯಕ್ಷರಾಗಿ ನೇಮಕಗೊಂಡ ಹರೀಶ್ ಪೂಜಾರಿ ಸಿ.ಹೆಚ್ ಮುಂದಿನ ಸೇವಾ ಕಾರ್ಯಗಳ ಬಗ್ಗೆ ತಿಳಿಸಿ, ಪ್ರತಿಯೊಬ್ಬರೂ ಸಹಕರಿಸಬೇಕೆಂದು ತಿಳಿಸಿದರು.
ವಲಯ ಸೇನಾನಿ ಪಲ್ಲವಿ ಕಾರಂತ ಪೂರ್ವಾಧ್ಯಕ್ಷ ಕಿರಣ್ ಕುಮಾರ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಪದಾಧಿಕಾರಿಗಳಾದ ಲಾರೆನ್ಸ್ ಗೊನ್ಸಾಲೀಸ್, ಅಣ್ಣಪ್ಪ ಸಾಸ್ತಾನ, ನಿಕಟಪೂರ್ವ ಅಧ್ಯಕ್ಷ ಕಿರಣ್ ಕುಮಾರ್, ಕಾರ್ಯದರ್ಶಿ ಮೋಹನ್.ಎ ಅವರಿಗೆ ಗೌರವ ಸಮರ್ಪಣೆ ನಡೆಯಿತು .
ಡಾ. ವಿ.ಕೆ.ಹೆಗ್ಡೆ, ಕ್ಲಿಫರ್ಡ್, ಪ್ರಕಾಶ್ ನಾಯಕ್ ಸಹಕರಿಸಿದರು.
ನೂತನ ಕಾರ್ಯದರ್ಶಿ ಸೋಮಶೇಖರ್ ವಂದಿಸಿದರು. ಅಣ್ಣಪ್ಪ ಸಾಸ್ತಾನ, ರೇಣುಕಾ ಕಣಿಯೂರು ಕಾರ್ಯಕ್ರಮ ನಿರೂಪಿಸಿದರು.


Share with

Leave a Reply

Your email address will not be published. Required fields are marked *