ಎರಡು ಕಾರುಗಳ ಮಧ್ಯೆ ಅಪಘಾತ ಓರ್ವ ಮೃತ್ಯು ಹಲವರಿಗೆ ಗಾಯ

Share with

ಮಂಜೇಶ್ವರ: ಎರಡು ಕಾರುಗಳ ಮಧ್ಯೆ ಉಂಟಾದ ಅಪಘಾತದಲ್ಲಿ ಓರ್ವ ಮೃತ ಪಟ್ಟಿದ್ದು ಮೂರು ಮಂದಿ ಗಾಯಗೊಂಡಿದ್ದಾರೆ. 1-7-2024ರಂದು ರಾತ್ರಿ ಮೊರತ್ತಣೆ ಜಂಕ್ಷನ್ ನಲ್ಲಿ ಅಪಘಾತ ಸಂಭವಿಸಿದೆ. ಮಿಂಜ ಪಂಚಾಯತ್ ವ್ಯಾಪ್ತಿಯ ತಲೇಕಳ ಕುದ್ರೆಪ್ಪಾಡಿ ನಿವಾಸಿ ಅಬೂಬಕ್ಕರ್ ಮುಸ್ಲಿಯಾರ್ (65) ಮೃತಪಟ್ಟ ವ್ಯಕ್ತಿ. ರಾತ್ರಿ 11 ಗಂಟೆ ವೇಳೆ ಕುಟುಂಬದೊಂದಿಗೆ ಪಾವೂರು ಎಂಬಲ್ಲಿ ಕಾರ್ಯಕ್ರಮ ಮುಗಿಸಿ ಆಲ್ಟೊ ಕಾರಿನಲ್ಲಿ ಮನೆಗೆ ಮರಳು ತ್ತಿದ್ದಾಗ ಮೊರತ್ತಣೆಯಲ್ಲಿ ಮಜೀರ್ಪಳ ಭಾಗದಿಂದ ಆಗಮಿಸಿದ ಇನೋವಾ ಕಾರು ಡಿಕ್ಕಿಹೊಡೆದು ಅಪಘಾತ ಉಂಟಾಗಿರುವುದಾಗಿ ದೆ ನ್ನಾಲಾಗಿದೆ. ಇದರಿಂದ ಅಬೂಬಕರ್ ಮುಸ್ಲಿಯಾರ್ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟಿದ್ದಾರೆ. ಕಾರು ಚ ಲಾ ಸುತ್ತಿದ್ದ ಇವರ ಪುತ್ರಿ ಹಾಗೂ ಪತ್ನಿ. ಸೊಸೆ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.


Share with

Leave a Reply

Your email address will not be published. Required fields are marked *