ಬೆಳ್ತಂಗಡಿ ತಾಲೂಕಿನ ಆರಿಕೋಡಿ ಅಮ್ಮನವರ ಕಾರಣಿಕ ಕ್ಷೇತ್ರಕ್ಕೆ ಸಾವಿರಾರು ಮಂದಿ ಭೇಟಿ ನೀಡಿ ದೇವಿ ಕೃಪೆಗೆ ಪಾತ್ರರಾಗಿದ್ದಾರೆ. ಅದೆಷ್ಟೋ ಜನರು ತಮ್ಮ ಸಂಕಷ್ಟಗಳನ್ನು ತಾಯಿಯ ಮುಂದಿಟ್ಟು ಪರಿಹಾರ ಕಂಡುಕೊಂಡಿದ್ದಾರೆ.
ವಿವಾಹ ಭಾಗ್ಯ ಇಲ್ಲದವರು, ಸಂತಾನ ಭಾಗ್ಯ ಇಲ್ಲದವರು, ಉದ್ಯೋಗ ಇಲ್ಲದವರು ಸಹಿತ ವಿವಿಧ ಸಮಸ್ಯೆ ಎದುರಿಸುತ್ತಿರುವವರು ತೊಂದರೆಗಳನ್ನು ಪರಿಹರಿಸುವಂತೆ ದೇವಿಯ ಮೊರೆ ಹೋಗುತ್ತಾರೆ. ಆರಿಕೋಡಿ ಅಮ್ಮನವರ ಕೃಪಾಕಟಾಕ್ಷತೆಯಿಂದ ಭಕ್ತರ ಕಷ್ಟ ಕಾರ್ಪಣ್ಯಗಳು ದೂರವಾಗುತ್ತಿದೆ. ಈ ಸತ್ಯದ ಕ್ಷೇತ್ರದ ಬಗ್ಗೆ ಖ್ಯಾತ ಯೂಟ್ಯೂಬ್ ಚಾನಲ್ ನವರು ನಡೆಸಿದ್ದ ಭಕ್ತಾಧಿಗಳ ನೈಜ ಸಂದರ್ಶನದಲ್ಲಿ ಅವರು ಹಂಚಿಕೊಂಡಿದ್ದ ಅನುಭವಗಳೇ ಸಾಕ್ಷಿಯಾಗಿದೆ.
ಈ ದೇವಸ್ಥಾನಕ್ಕೆ ಬಂದಿದ್ದ ಭಕ್ತಾಧಿಗಳು ತಮ್ಮ ಕಷ್ಟಗಳನ್ನು ತಾಯಿ ಹೇಗೆ ನಿವಾರಿಸಿದ್ದಾಳೆ ಅನ್ನೋದನ್ನು ಖುದ್ದಾಗಿ ಸಂದರ್ಶನದ ಮೂಲಕ ತಿಳಿಸಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂತಹ ಅನೇಕ ಪುಣ್ಯ ಕ್ಷೇತ್ರಗಳಿವೆ. ಅದರಲ್ಲಿ ಆರಿಕೋಡಿ ಅಮ್ಮನವರ ಕ್ಷೇತ್ರದ ಮಹಿಮೆ ಅಪಾರ.
ವಿ.ಜೆ. ವಿಖ್ಯಾತ್ ಎಂಬ ಯೂಟ್ಯೂಬ್ ಚಾನೆಲ್ ನಲ್ಲಿ ಜನರು ತಮ್ಮ ಕಷ್ಟವನ್ನು ತಾಯಿ ಹೇಗೆ ದೂರ ಮಾಡಿದ್ದಾಳೆ ಎಂದು ವಿವರಿಸಿದ್ದರು.
ಆದರೆ ಈ ವೀಡಿಯೊವನ್ನು ಕೇರಳದ ಕಾಸರಗೋಡು ಜಿಲ್ಲೆಯ ಎಂದು ಹೇಳಲಾದ ಜ್ಯೋತಿಷಿಯೊಬ್ಬರು ದುರ್ಬಳಕೆ ಮಾಡಿದ್ದಾರೆ. ವಿ.ಜೆ.ವಿಖ್ಯಾತ್ ಅವರ ವೀಡಿಯೋದ ತುಣುಕನ್ನು ಹಾಕಿ ಕೇರಳದ ಜ್ಯೋತಿಷಿ ಇದು ನಮ್ಮ ಕ್ಷೇತ್ರದಲ್ಲಿ ನಡೆದಿರುವುದು ಎಂದು ಬಿಂಬಿಸುವಂತೆ ವೀಡಿಯೋ ಮಾಡಿ ಜನರನ್ನು ತಪ್ಪು ದಾರಿಗೆ ಕೊಂಡೊಯ್ಯುವ ಕೆಲಸ ಮಾಡಿದ್ದಾರೆ. ವಿ.ಜೆ.ವಿಖ್ಯಾತ್ ಅವರು ಲೈವ್ ನಲ್ಲಿ ಜ್ಯೋತಿಷಿಗೆ ಕರೆ ಮಾಡಿದಾಗ ಆತ ಮೊದಲಿಗೆ ಅದು ನಮ್ಮದೇ ಕ್ಷೇತ್ರದ್ದು ಎಂದು ಹೇಳಿದ್ದಾನೆ. ಬಳಿಕ ವಿಖ್ಯಾತ್ ಅವರು ಆ ವೀಡಿಯೊದಲ್ಲಿ ಇರುವ ನಿರೂಪಕ ನಾನೇ. ಅದು ಬೆಳ್ತಂಗಡಿ ತಾಲೂಕಿನ ಆರಿಕೊಡಿ ಕ್ಷೇತ್ರದ ವೀಡಿಯೋ. ಜನರನ್ನು ಯಾಕೆ ತಪ್ಪು ದಾರಿಗೆ ತರುತ್ತೀರಿ. ನಿಮ್ಮಿಂದಾಗಿ ನೈಜ ಜ್ಯೋತಿಷಿಗಳಿಗೆ ಕೆಟ್ಟ ಹೆಸರು ಎಂದಾಗ ಕೇರಳ ಮೂಲದ ಎಂದು ಹೇಳಲಾದ ಜ್ಯೋತಿಷಿ ಕೂಡಲೇ ಕಾಲ್ ಕಟ್ ಮಾಡಿದ್ದಾರೆ. ಇಂತಹ ನಕಲಿ ಜ್ಯೋತಿಷಿಗಳಿಂದ ಜನರು ಜಾಗ್ರತರಾಗಬೇಕಿದೆ.