ಉಪ್ಪಳದಲ್ಲಿ ವಿಶ್ವಹಿಂದೂ ಪರಿಷತ್‌ನಿಂದ ಬೃಹತ್ ಪ್ರತಿಭಟನೆ

Share with

ಉಪ್ಪಳ:  ವಿಶ್ವ ಹಿಂದೂ ಪರಿಷತ್ ಬಜರಂಗದಳ ಮಾತೃಶಕ್ತಿ ದರ‍್ಗಾವಾಹಿನಿ ಮಂಜೇಶ್ವರ ಪ್ರಖಂಡದ ಆಶ್ರಯದಲ್ಲಿ  ಬಾಂಗ್ಲಾದೇಶದಲ್ಲಿ  ಹಿಂದೂಗಳನ್ನು ದಾರುಣವಾಗಿ ಹತ್ಯೆ ಮಾಡುತ್ತಿರುವುದರ ವಿರುದ್ಧ ಈ ಹೀನಕೃತ್ಯವನ್ನು ಖಂಡಿಸಿ ಉಪ್ಪಳಪೇಟೆಯಲ್ಲಿ   ಬೃಹತ್ ಪ್ರತಿಭಟನಾ ಮೆರವಣಿಗೆ    ನಡೆಯಿತು . ವಿಶ್ವ ಹಿಂದೂ ಪರಿಷತ್ ಬಜರಂಗದಳ  ಪುತ್ತೂರು ಜಿಲ್ಲಾ ವಿದ್ಯರ‍್ಥಿ ಪ್ರಮುಖ್ ರಾದ  ವಿಕಾಸ್ ಪುತ್ತೂರು ದಿಕ್ಸೂಚಿ ಭಾಷಣಗೈದರು. ಈ ಸಂರ‍್ಭದಲ್ಲಿ ವಿಶ್ವ ಹಿಂದೂ ಹಾಗೂ ಸಂಘ ಪರಿವಾರದ ಮುಂಖAಡರಾದ  ಸಂಕಪ್ಪ ಭಂಡಾರಿ  ಬಳ್ಳಂಬೆಟ್ಟು, ಯಾದವ ಕೀರ್ತೇಶ್ವರ,   ಸತ್ಯ ವೀರನಗರ, ರಂಜಿತ್ ಬಾಬಾ, ಜಯಶರ್ಮಿಳ, ಪದ್ಮ ಮೋಹನ್‌ದಾಸ್, ವಸಂತಕುಮಾರ್ ಮಯ್ಯ, ಹರಿನಾಥ ಭಂಡಾರಿ ಮುಳಿಂಜ,  ಮುಂತಾದವರು ಉಪಸ್ಥಿತರಿದ್ದರು. ಯಾದವ ಕೀರ್ತೇಶ್ವರ ಸ್ವಾಗತಿಸಿ, ಸಂಕಪ್ಪ ಭಂಡಾರಿ ವಂದಿಸಿದರು.


Share with

Leave a Reply

Your email address will not be published. Required fields are marked *