
ಪೈವಳಿಕೆ : ಕುರುಡಪದವು ಕುರಿಯ ವಿಠಲ ಶಾಸ್ತ್ರೀ ಸ್ಮಾರಕ ಪ್ರೌಢ ಶಾಲೆಯ ಮೆನೇಜರ್ ಕುರಿಯ ಗೋಪಾಲಕೃಷ್ಣ ಶಾಸ್ತ್ರೀ (65) ನಿಧಾನರಾದರು. ಬುಧವಾರ ಬೆಳಿಗ್ಗೆ ಮನೆಯಲ್ಲಿ ಹೃದಯಘಾತ ಉಂಟಾಗಿದ್ದು. ಮಂಗಳೂರಿನ ಆಸ್ಪತ್ರೆಗೆ ಸಾಗಿಸುವ ಮಧ್ಯೆ ನಿಧಾನರಾದರು. ಇವರು ಧಾರ್ಮಿಕ ಮುಂದಾಳು, ಸಮಾಜ ಸೇವಾಕರೂ ಆಗಿದ್ದಾರೆ. ಮೃತರು ಮಕ್ಕಳಾದ ಗಂಗಾಲಕ್ಷ್ಮಿ, ಶ್ರೀರಾಮ, ಅಳಿಯ ಅಪೂರ್ವ ಭಟ್. ಸಹೋದರರಾದ ಗಣಪತಿ ಶಾಸ್ತ್ರಿ .(ಭಾಗವತರು )ಮಹಾಬಲ ಶಾಸ್ತ್ರೀ ಹಾಗೂ ಅಪಾರ ಬಂಧುಗಳು, ಹಿತೈಷಿ ಗಳನ್ನು ಅಗಲಿದ್ದಾರೆ. ತಂದೆ ರಾಮ ಶಾಸ್ತ್ರೀ. ತಾಯಿ ಗಂಗಮ್ಮ,ಪತ್ನಿ ಸಾವಿತ್ರಿ, ಸಹೋದರಾದ ನಾರಾಯಣ ಶಾಸ್ತ್ರಿ, ಶ್ರೀನಿವಾಸ ಶಾಸ್ತ್ರಿ ಈ ಹಿಂದೆ ನಿಧಾನರಾಗಿದ್ದಾರೆ. ಮೃತರ ಮನೆಗೆ ಶಾಲಾ ಅಧ್ಯಾಪಕ ವೃಂದ, ಸಿಬ್ಬಂದಿ ವರ್ಗ ಹಾಗೂ ಊರವರ ಸಹಿತ ಹಲವು ಮಂದಿ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು. ನಿಧನಕ್ಕೆ ಶ್ರೀ ರಾಮ ಭಜನಾ ಮಂದಿರ, ವಾರಾಹಿ ಸೇವಾ ಸಮಿತಿ ಕುರುಡ ಪದವು ಸಂತಾಪ ಸೂಚಿಸಿದೆ.





