ಚಿತ್ರದುರ್ಗದ ಬಳಿ ಸಂಭವಿಸಿದ ಬಸ್ ದುರಂತ ಇಡೀ ರಾಜ್ಯವನ್ನು ದಿಗ್ಧಮೆಗೊಳಿಸಿದೆ. ಅಪಘಾತಕ್ಕೆ ಕಾರಣ ಏನು ಎಂಬ ಪ್ರಶ್ನೆ ಹುಟ್ಟಿದೆ. ಟ್ರಕ್ ಚಾಲಕ ಅತಿ ವೇಗದಿಂದ ಬಂದು ಬಸ್ಗೆ ಡಿಕ್ಕಿ ಹೊಡೆದಿದ್ದಾನೆ. ಕಂಟೈನರ್ ಬೆಂಗಳೂರು ಕಡೆ ಬರುತ್ತಿತ್ತು.

ಟ್ರಕ್ ಚಾಲಕರು ದೀರ್ಘ ದೂರ ಚಾಲನೆ ಮಾಡುವಾಗ ತಂಬಾಕು ಉತ್ಪನ್ನಗಳನ್ನು ಅತಿಯಾಗಿ ಬಳಸುತ್ತಾರೆ. ತಂಬಾಕು ಸೇವನೆಯ ಮಿತಿ ಮೀರಿದ ಬಳಕೆಯಿಂದ ಚಾಲಕರು ಅತಿ ವೇಗದಲ್ಲಿ ವಾಹನ ಚಲಾಯಿಸುತ್ತಾರೆ ಎಂಬ ದೂರುಗಳಿವೆ. ತನಿಖೆಯಲ್ಲಿ ಕಾರಣ ತಿಳಿದುಬರಲಿದೆ.




