![ಮೋದಿ](https://i0.wp.com/veekshakavani.com/wp-content/uploads/2023/08/image_editor_output_image-1684948319-1691309654426.webp?resize=1000%2C600&ssl=1)
ಅಮೃತ್ ಭಾರತ್ ಸ್ಟೇಷನ್ಗೆ ಶಂಕುಸ್ಥಾಪನೆ ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ಭಾರತೀಯ
ರೈಲ್ವೇಗೆ ಹೊಸ ಟಚ್ ನೀಡಿ ಅದನ್ನು ವಿಶ್ವದಲ್ಲೇ ಮಾದರಿಯನ್ನಾಗಿಸಲಾಗುವುದು ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ಈ ಯೋಜನೆಯಂತೆ ದೇಶದಾದ್ಯಂತ ಒಟ್ಟು 1309 ನಿಲ್ದಾಣಗಳನ್ನು ಪುನರಾಭಿವೃದ್ಧಿ ಮಾಡಲಾಗುವುದು. ಈ ಪೈಕಿ ಇಂದು 508 ರೈಲು ನಿಲ್ದಾಣಗಳ ಪುನರಾಭಿವೃದ್ಧಿಗೆ ಇಂದು ಶಂಕುಸ್ಥಾಪನೆ ನೆರವೇರಿಸಿದರು.
ರಾಜ್ಯದ ಬಳ್ಳಾರಿ, ಬೆಳಗಾವಿ, ಬೀದರ್, ಮಂಗಳೂರು, ದಾವಣಗೆರೆ, ಧಾರವಾಡ ಜಿಲ್ಲೆ ಸೇರಿದಂತೆ ಹಲವು ರೈಲ್ವೇ ನಿಲ್ದಾಣಗಳು ಹೊಸ ರೂಪ ಪಡೆಯಲಿವೆ.