ವಿದ್ಯುತ್ ತಂತಿ ಮೇಲೆ ಮರ ಮುರಿದು ಬಿದ್ದು ರಸ್ತೆ ತಡೆ

Share with

ಮಂಜೇಶ್ವರ: ಮಳೆಗೆ ಮರವೊಂದು ರಸ್ತೆಗೆ ಮುರಿದು ಬಿದ್ದು ಸಂಚಾರಕ್ಕೆ ತಡೆ ಉಂಟಾದ ಘಟನೆ ನಡೆದಿದೆ. ಹೊಸಂಗಡಿ-ಆನೆಕಲ್ಲು ರಸ್ತೆಯ ಕಡಂಬಾರು ಎಂಬಲ್ಲಿ ಶುಕ್ರವಾರ ರಾತ್ರಿ ಸುಮಾರು ೧೦ಗಂಟೆ ವೇಳೆ ರಸ್ತೆ ಬದಿಯಲ್ಲಿದ್ದ ಬೃಹತ್ ಅಕೇಶೀಯ ಮರವೊಂದು ಮುರಿದು ವಿದ್ಯುತ್ ತಂತಿಗೆ ಬಿದ್ದು ತಂತಿ ತುಂಡಾಗಿ ಚೆಲ್ಲಾಪಿಲ್ಲಿಯಾಗಿದೆ. ಈ ವೇಳೆ ವಾಹನ ಸಂಚಾರ ಕಡಿಮೆ ಇದ್ದುದರಿಂದ ಅಪಾಯ ತಪ್ಪಿದೆ. ಕೂಡಲೇ ವಿದ್ಯುತ್ ಇಲಾಖೆ ತಲುಪಿ ವಿದ್ಯುತ್ ವಿಚ್ಚೇದಿಸಿದ್ದಾರೆ. ಉಪ್ಪಳ ಅಗ್ನಿ ಶಾಮಕ ದಳದ ಸ್ಟೇಷನ್ ಆಫೀಸರ್ ಸುನಿಲ್ ಕುಮಾರ್ ನೇತೃತ್ವದ ಸಿಬ್ಬಂದಿಗಳು ತಲುಪಿ ಮರವನ್ನು ಕಡಿದು ತೆರವುಗೊಳಿಸಿ ಸಂಚಾರ ಸುಗಮಗೊಳಿಸಿದ್ದಾರೆ.


Share with

Leave a Reply

Your email address will not be published. Required fields are marked *