
ಉಪ್ಪಳ: ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಮೂಸೋಡಿ ಶಾಲಾ ಬಳಿಯಿಂದ ಮಣಿಮುಂಡ ಲೋಕೋಪಯೋಗಿ ಇಲಾಖೆಗೆ ಸೇರಿದ ಸಮುದ್ರ ತೀರ ರಸ್ತೆ ಹದಗೆಟ್ಟು ನೀರು ತುಂಬಿಕೊoಡು ಸಂಚಾರಕ್ಕೆ ಅಡಚಣೆ ಉಂಟಾಗುತ್ತಿರುವುದಾಗಿ ದೂರಲಾಗಿದೆ. ಸುಮಾರು ಒಂದೂವರೆ ಕಿಲೋ ಮೀಟರ್ ಉದ್ದಕ್ಕೆ ಅಲ್ಲಲ್ಲಿ ಬೃಹತ್ ಹೊಂಡಗಳು ಸೃಷ್ಟಿಯಾಗಿದ್ದು, ಮಳೆಗೆ ಭಾರೀ ಪ್ರಮಾಣದಲ್ಲಿ ನೀರು ಸಂಗ್ರಹಗೊoಡು ಹೊಳೆಯ ರೀತಿಯಲ್ಲಿ ಕಂಡುಬರುತ್ತಿದೆ. ಪರಿಸರದಲ್ಲಿ ತ್ಯಾಜ್ಯ ಸಂಗ್ರಹಗೊoಡು ಆತಂಕ ಉಂಟಾಗಿದೆ.
ಮೀನು ಕಾರ್ಮಿಕರ ಸಹಿತ ನೂರಾರು ಮನೆಗಳು ಹೊಂದಿರುವ ಈ ಪ್ರದೇಶದಲ್ಲಿ ರಸ್ತೆ ಶೋಚನೀಯವಸ್ಥೆಯಿಂದ ದ್ವಿಚಕ್ರ, ತ್ರಿಚಕ್ರ ವಾಹನ ಸಂಚಾರ ಆತಂಕವಗಿದ್ದು, ಅಟೋರಿಕ್ಷಾ ಬಾಡಿಗೆ ಹೋಗಲು ಹಿಂಜರಿಯುವ ಅವಸ್ಥೆ ಉಂಟಾಗಿದೆ. ನಡೆದು ಹೋಗುವ ವೇಳೆ ಕೆಸರು ನೀರಿನ ಸಿಂಚನ ಉಂಟಾಗುತ್ತಿದೆ. ಈ ರಸ್ತೆ ದುರಸ್ಥಿಗೆ ವಿವಿಧ ಅಧಿಕಾರಿಗಳಿಗೆ ಸ್ಥಳೀಯರು ಹಲವು ಬಾರಿ ಮನವಿಯನ್ನು ನೀಡಿದರೂ ಯಾವುದೇ ಕ್ರಮಯಿಲ್ಲವೆಂದು ಊರವರು ತಿಳಿಸಿದ್ದಾರೆ.
ಸಮುದ್ರದಲ್ಲಿ ದಡ ನಿರ್ಮಿಸಲು ಕಗ್ಗಲ್ಲು ಲಾರಿಗಳು ಸಂಚರಿಸುತ್ತಿದೆ. ಅಲ್ಲದೆ ನೀರಿನ ಪೈಪ್ ಅಳವಡಿಸಲು ರಸ್ತೆಯನ್ನು ಹಗೆದು ಬಳಿಕ ದುರಸ್ಥಿಗೊಳಿಸದ ಹಿನ್ನೆಲೆಯಲ್ಲಿ ರಸ್ತೆ ಇಷ್ಟೊಂದು ಶೋಚನೀಯ ಸ್ಥಿತಿಗೆ ತಲುಪಲು ಕಾರಣವೆನ್ನಲಾಗಿದೆ. ಸಂಬoಧಪಟ್ಟ ಅಧಿಕಾರಿಗಳು ಈ ರಸ್ತೆಗೆ ವ್ಯವಸ್ಥಿತ ಚರಂಡಿ ಹಾಗೂ ಉನ್ನತ ಮಟ್ಟದಲ್ಲಿ ಡಾಮರೀಕರಣಕ್ಕೆ ಊರವರು ಆಗ್ರಹಿಸಿದ್ದಾರೆ.