ಪೆರ್ಲ: ಹಿಂದೂ ಸಂಘಟನೆಯೆಂದು ಬಿಂಬಿಸಿ ನಕಲಿ ಕೂಪನ್ ನೀಡಿ ನಾಗರಿಕರಿಂದ ಹಣ ಸಂಗ್ರಹ; ಸಾರ್ವಜನಿಕರಿಂದ ತರಾಟೆ

Share with

ಪೆರ್ಲ: ಜನ-ಜಂಗುಳಿ ಇರುವ ಪ್ರದೇಶದಲ್ಲಿ ದೇಣಿಗೆಯನ್ನು ಸಂಗ್ರಹಿಸಿ ನಕಲಿ ಕೂಪನ್ ನೀಡುವ ತಂಡವೊಂದನ್ನು ಪೆರ್ಲ ಪೇಟೆಯಲ್ಲಿ ನಾಗರಿಕರು ಸುತ್ತುವರಿದು ತರಾಟೆಗೆ ತೆಗೆದುಕೊಂಡಿದ್ದಾರೆ.

ಸಂಚರಿಸುತ್ತಿದ್ದ ವಾಹನ ಪರಿಶೋಧಿಸಿದಾಗ ದಾಖಲೆ ಇನ್ಯಾರದೊ ಹೆಸರಿನಲ್ಲಿದ್ದು ವಾಹನಕ್ಕೆ ಭಗವತಿ- ಸಂಚಾರಿ ಗುಳಿಗ ಎಂಬ ಸ್ಟಿಕರ್ ಅಂಟಿಸಿ ಹಿಂದೂ ಸಂಘಟನೆ ಎಂದು ಬಿಂಬಿಸುವಂತೆ ತೆರಳಿ ನಾಗರಿಕರಿಂದ ಕಡಬದ ತಂಡವೊಂದು ಹಣ ಸಂಗ್ರಹಿಸುತ್ತಿದ್ದರು.

ಕರ್ನಾಟಕ ಮೂಲದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕಡಬದ ತಂಡವೊಂದು ಆಶಕ್ತರ ಹೆಸರಿನಲ್ಲಿ ಪೇಟೆಯಲ್ಲಿ, ಜಾತ್ರೆ, ಜನ-ಜಂಗುಳಿ ಇರುವಲ್ಲಿ ದೇಣಿಗೆ ಸಂಗ್ರಹಿಸಿ ನಕಲಿ ಕೂಪನ್ ನೀಡುತ್ತಿದ್ದರು. ಇದನ್ನು ಕಂಡ ನಾಗರಿಕರು, ತಂಡವನ್ನು ಪೆರ್ಲ ಪೇಟೆಯಲ್ಲಿ ಸುತ್ತುವರಿದು ತರಾಟೆಗೆ ತೆಗೆದುಕೊಂಡಿದ್ದಾರೆ.

ನಕಲಿ ಕೂಪನ್ ನೀಡಿ ನಾಗರಿಕರಿಂದ ಹಣ ಸಂಗ್ರಹ

ಆರಂಭದಲ್ಲಿ ತಂಡದಲ್ಲಿ ಇದ್ದ ಒಬ್ಬನ ಹೆಸರು ಕೇಳಿದಾಗ ಹರೀಶ ಎಂಬ ಹಿಂದು ಹೆಸರು ಹೇಳಿದ್ದು ಈತನ ಪೂರ್ವಪರ ದಾಖಲೆ ಪರಿಶೀಲಿಸಿದಾಗ ಹಾರೀಸ್ ಎಂದು ತಿಳಿದುಬಂತು. ಬಳಿಕ ಇನ್ನೊರ್ವನನ್ನು ವಿಚಾರಿಸಿದಾಗ ಆತನು ಅನ್ಯಮತೀಯನೆಂದು ತಿಳಿದು ಬಂದಿದ್ದು, ಇನ್ನೊರ್ವ ದಿನಕೂಲಿ ಆಧಾರದಲ್ಲಿ ಕೆಲಸ ಮಾಡಲು ಇವರೊಟ್ಟಿಗೆ ಸೇರಿಕೊಂಡಿದ್ದ ಎನ್ನಲಾಗಿದೆ.

ಮೂವರು ಈ ತಂಡದಲ್ಲಿದ್ದು ಇವರು ಸಂಚರಿಸುತ್ತಿದ್ದ ವಾಹನ ಪರಿಶೋಧಿಸಿದಾಗ ದಾಖಲೆ ಇನ್ಯಾರದ್ದೂ ಹೆಸರಿನಲ್ಲಿದ್ದು ವಾಹನಕ್ಕೆ ಭಗವತಿ-ಸಂಚಾರಿ ಗುಳಿಗ ಎಂಬ ಸ್ಟಿಕ್ಕರ್ ಅಂಟಿಸಿ ಹಿಂದೂ ಸಂಘಟನೆ ಎಂದು ಬಿಂಬಿಸುವಂತೆ ತೆರಳಿ ನಾಗರಿಕರಿಂದ ಹಣ ಸಂಗ್ರಹಿಸುತ್ತಿದ್ದರು. ಬದಿಯಡ್ಕ ಠಾಣಾ ಪೋಲಿಸರು ಸ್ಥಳಕ್ಕಾಗಮಿಸಿ ತಂಡವನ್ನು ಬಂಧಿಸಿದ್ದಾರೆ.


Share with

Leave a Reply

Your email address will not be published. Required fields are marked *