ಮಂಜೇಶ್ವರ: ಹೊಸಂಗಡಿ ಪೇಟೇಯಲ್ಲಿ ಕಳೆದ 48 ವರ್ಷಗಳಿಂದ ವ್ಯಾಪಾರಿಯಾಗಿದ್ದ ನವೀನ್ ಸ್ಟೋರ್ ಮಾಲಕ, ಸಿಪಿಎಂ ನೇತಾರ ದುರ್ಗಿಪಳ್ಳ ನಿವಾಸಿ ಕೃಷ್ಣ ಶೆಟ್ಟಿಗಾರ್ [78] ಭಾನುವಾರ ಬೆಳಿಗ್ಗೆ ಮಂಗಳೂರಿನ ಖಾಸಾಗಿ ಆಸ್ಪತ್ರೆಯಲ್ಲಿ ನಿಧನರಾದರು.
![ಹೊಸಂಗಡಿ ನವೀನ್ ಸ್ಟೋರ್ ಮಾಲಕ ಕೃಷ್ಣ ಶೆಟ್ಟಿಗಾರ್](https://i0.wp.com/veekshakavani.com/wp-content/uploads/2024/03/ಕೃಷ್ಣ-ಶೆಟ್ಟಿಗಾರ್.jpg?resize=640%2C400&ssl=1)
ಎರಡು ದಿನಗಳ ಹಿಂದೆ ಮನೆಯಲ್ಲಿ ಹೃದಯಘಾತ ಉಂಟಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಂಗಡಿಯಲ್ಲಿ ಸ್ಟೇಶನರಿ ಸಾಮಾಗ್ರಿ ಹಾಗೂ ಕಾರವಲ್ ಸಹಿತ ವಿವಿಧ ಪತ್ರಿಕೆಯ ಏಜಂಟ್ರಾಗಿ ಹೆಸರುವಾಸಿಯಾಗಿದ್ದರು. ಸಮಾಜಸೇವಕರೂ ಆಗಿದ್ದಾರೆ. ಹೊಸಂಗಡಿ ರಾಮತ್ತ ಮಜಲ್ ಸಾರ್ವಜನಿಕ ರುದ್ರಭೂಮಿ ಸಮಿತಿಯ ಕಾರ್ಯದರ್ಶಿ, ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಮಂಜೇಶ್ವರ ಘಟಕದ ವೆಲ್ಪೇರ್ ಸೊಸೈಟಿಯ ಅಧ್ಯಕ್ಷರಾಗಿದ್ದರು.
ಮೃತರು ಪತ್ನಿ ಪ್ರೇಮಲತಾ ಟೀಚರ್, ಮಕ್ಕಳಾದ ದಯಾಕರ, ಸುಪ್ರಿಯ, ಸೊಸೆ ಸುಜಾತ, ಅಳಿಯ ಜಗನ್ನಾಥ ಶೆಟ್ಟಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತದೇಹವನ್ನು ಕುಂಬಳೆ ಜಿಲ್ಲಾ ಆಶ್ಪತ್ರೆಯಿಂದ ಹೊಸಂಗಡಿಯ ಎ.ಕೆ.ಜಿ ಮಂದಿರದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗಿದೆ. ಅಲ್ಲಿಂದ ಮನೆಗೆ ಕೊಂಡುಹೋಗಿ ಬಳಿಕ ರಾಮತ್ತಮಜಲ್ ರುದ್ರಭೂಮಿಯಲ್ಲಿ ಸಂಸ್ಕಾರ ನಡೆಯಿತು.