Kasaragodu : ನಕಲಿ ಚಿನ್ನ ಅಡವಿರಿಸಿ ವಂಚನೆ- ಮಹಿಳೆಯರ ಸಹಿತ ನಾಲ್ವರ ವಿರುದ್ಧ ಪ್ರಕರಣ ದಾಖಲು

Share with

ಕಾಸರಗೋಡು: ನಕಲಿ ಚಿನ್ನ ಅಡವಿರಿಸಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಮುತ್ತೂಟ್‌ ಫಿನ್‌ಕೋರ್ಪ್‌ನ ಕಾಂಞಂಗಾಡ್‌, ಕೋಟಚ್ಚೇರಿ ಬ್ರ್ಯಾಂಚ್‌ ಮೆನೇಜರ್‌ ಅದಿಯಾಂಬೂರ್‌ ಕುನ್ನುಮ್ಮಲ್‌ ಹೌಸ್‌ನ ಎಂ. ಮಂಜುಳಾ ನೀಡಿದ ದೂರಿನಂತೆ ಕೊಳವಯಲ್‌ ಮುಟ್ಟುಂತಲದ ಎ.ನೌಶಾದ್‌ ವಿರುದ್ಧ ಹೊಸದುರ್ಗ ಪೊಲೀಸರು ಕೇಸು ದಾಖಲಿಸಿದ್ದಾರೆ. 2025ರ ಜನವರಿ 23ರಂದು 11.9 ಗ್ರಾಂ ನಕಲಿ ಚಿನ್ನವನ್ನು ಅಡವಿರಿಸಿ 65,726 ರೂ. ಪಡೆದು ವಂಚಿಸಿದ್ದಾಗಿ ಪೊಲೀಸರಿಗೆ ದೂರು ನೀಡಲಾಗಿತ್ತು.

ಇನ್ನೊಂದು ಘಟನೆಯಲ್ಲಿ ಕರಿಂದಳಂ ಸೇವಾ ಸಹಕಾರಿ ಬ್ಯಾಂಕ್‌ ಕಾರ್ಯದರ್ಶಿ ಎ.ಮಧುಸೂದನನ್‌ ನೀಡಿದ ದೂರಿನಂತೆ ನೀಲೇಶ್ವರ ಪೊಲೀಸರು ಕರಿಂದಳ ಕೊಲ್ಲಂಪಾರೆ ವಾಳೂರ್‌ನ ವಿ. ರಮ್ಯಾ, ಕರಿಂದಳ ಶಿಜಿತ್‌ ಮತ್ತು ರತಿಕಲ ವಿರುದ್ಧ ಕೇಸು ದಾಖಲಿಸಿದ್ದಾರೆ. 26.400 ಗ್ರಾಂ ನಕಲಿ ಚಿನ್ನ ಅಡವಿರಿಸಿ ಹಣ ಲಪಟಾಯಿಸಿದ್ದಾಗಿ ದೂರು ನೀಡಲಾಗಿತ್ತು.


Share with

Leave a Reply

Your email address will not be published. Required fields are marked *