ಉಡುಪಿ: ಅಯೋಧ್ಯೆ ಬಾಲರಾಮನಿಗೆ ಕೋಟ ಶ್ರೀಕಾಶಿಮಠದಿಂದ ಸುವರ್ಣ ಪೀಠ ಪ್ರಭಾವಳಿ ಸಮರ್ಪಣೆ

Share with

ಉಡುಪಿ: ಕೋಟದ ಶ್ರೀಕಾಶಿಮಠ ಸಂಸ್ಥಾನವು ಸುಮಾರು ಒಂದು ಕೆಜಿ ಚಿನ್ನ ಮತ್ತು 3ಕೆಜಿ ಬೆಳ್ಳಿಯನ್ನು ಒಳಗೊಂಡಿರುವ 70 ಲಕ್ಷ ರೂಪಾಯಿ ಮೌಲ್ಯದ ಸುವರ್ಣ ಪೀಠ ಪ್ರಭಾವಳಿಯನ್ನು ಬಾಲರಾಮನ ಉತ್ಸವಮೂರ್ತಿಗಾಗಿ ಸಿದ್ಧಪಡಿಸಿದೆ.

ಅಯೋಧ್ಯೆ ಬಾಲರಾಮನಿಗೆ ಕೋಟ ಶ್ರೀಕಾಶಿಮಠದಿಂದ ಸುವರ್ಣ ಪೀಠ ಪ್ರಭಾವಳಿ ಸಮರ್ಪಣೆ

ಈ ಹಿನ್ನೆಲೆಯಲ್ಲಿ ಕೋಟದ ಶ್ರೀಕಾಶಿಮಠದ ಶಾಖೆಯಲ್ಲಿ ಚಿನ್ನದ ಪ್ರಭಾವಳಿಯನ್ನು ಅದ್ದೂರಿ ಮೆರವಣಿಗೆ ಮಾಡಿ ಅಯೋಧ್ಯೆಗೆ ಕಳುಹಿಸಿಕೊಡಲಾಯಿತು.

ಸುಮಾರು ಒಂದು ಕೆಜಿ ಚಿನ್ನ ಮತ್ತು 3ಕೆಜಿ ಬೆಳ್ಳಿಯನ್ನು ಒಳಗೊಂಡಿರುವ 70 ಲಕ್ಷ ರೂಪಾಯಿ ಮೌಲ್ಯದ ಸುವರ್ಣ ಪೀಠ ಪ್ರಭಾವಳಿ

ಅಯೋಧ್ಯೆಯಲ್ಲಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ನಡೆಯುತ್ತಿರುವ 48 ದಿನಗಳ ಕಾಲದ ಮಂಡಲೋತ್ಸವದಲ್ಲಿ ಈ ಸುವರ್ಣ ಪ್ರಭಾವಳಿಯನ್ನು ಬಾಲರಾಮನ ಉತ್ಸವ ಮೂರ್ತಿಗೆ ತೋಡಿಸಲಾಯಿತು. ಈಗಾಗಲೇ ಕೋಟದ ಶ್ರೀಕಾಶಿಮಠ ಸಂಸ್ಥಾನವು ಅಯೋಧ್ಯೆಯ ಬಾಲರಾಮನಿಗೆ ಬೆಳ್ಳಿಯ ಪಲ್ಲಕ್ಕಿ ಸಮರ್ಪಿಸಿದೆ.


Share with

Leave a Reply

Your email address will not be published. Required fields are marked *