ನರಿಕೊಂಬು ಗ್ರಾಮದ ಕರ್ಬೆಟ್ಟು ಪಾಂಡಿ ಪೂಜಾರಿ ಕುಟುಂಬಸ್ಥರ ನಾಗಬನ ಜೀರ್ಣೋದ್ಧಾರಕ್ಕೆ  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಂಜೂರಾದ ಅನುದಾನದ  ಡಿ ಡಿ ಹಸ್ತಾಂತರ

Share with

ಬಂಟ್ವಾಳ : ಬಂಟ್ವಾಳ ತಾಲೂಕು, ನರಿಕೊಂಬು ಗ್ರಾಮದ ಕರ್ಬೆಟ್ಟು ಪಾಂಡಿ ಪೂಜಾರಿ ಕುಟುಂಬಸ್ಥರ ನಾಗಬನ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂಪಾಯಿ 25,000 ₹ ಅನುದಾನ ಮಂಜೂರಾತಿ ಗೊಂಡಿದ್ದು ಇದರ ಡಿ ಡಿ ಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ  ತುಂಬೆ ವಲಯದ ಮೇಲ್ವಿಚಾರಕಿ ಶ್ರೀಮತಿ ಮಮತಾ ಸಂತೋಷ್ ರವರು  ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಹಸ್ತಾಂತರಿಸಿದರು .

ಈ ಸಂದರ್ಭ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಜಗನ್ನಾಥ ಸುವರ್ಣ ಕಾರ್ಯದರ್ಶಿ ಉಮಾನಾಥ ಸುವರ್ಣ,ಕೋಶಾಧಿಕಾರಿ ಜಯ ಸುವರ್ಣ, ಸದಸ್ಯರಾದ ವಸಂತ ಸುವರ್ಣ ಹಾಗೂ ಧನಂಜಯ ಸುವರ್ಣ, ನರಿ ಕೊಂಬು ಬಿ ಒಕ್ಕೂಟದ ಅಧ್ಯಕ್ಷರಾದ ಜಯಂತ ಸೇವಾ ಪ್ರತಿನಿಧಿಗಳಾದ  ಪ್ರತಿಭಾ ಮತ್ತು ಕುಸುಮಾವತಿ ಉಪಸ್ಥಿತರಿದ್ದರು.


Share with

Leave a Reply

Your email address will not be published. Required fields are marked *