ಉಪ್ಪಳ: ಪ್ರಸಿದ್ದ ಭಜನೆ ಗಾರ, ನಾಟಕ ಕಲಾವಿದ ಜನಾರ್ಧನ ರಾವ್ ನಿಧನ

Share with

ಉಪ್ಪಳ: ಸುಬ್ಬಯ್ಯಕಟ್ಟೆ ಸಮೀಪದ ನೀರ್ಪಂತಿ ನಿವಾಸಿ ಪ್ರಸಿದ್ದ ಭಜನೆ ಗಾರ ಜನಾಧ೯ನ ರಾವ್ (79) ನಿಧನರಾದರು. ಉಸಿರಾಟ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೆ ಜ.30ರಂದು ಮದ್ಯಾಹ್ನ ಮಂಗಳೂರು ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಪ್ರಸಿದ್ದ ಭಜನೆ ಗಾರ, ನಾಟಕ ಕಲಾವಿದ ಜನಾರ್ಧನ ರಾವ್

ಸುಬ್ಬಯಕಟ್ಟೆಯಲ್ಲಿ ತರಂಗಿಣಿ ಪ್ರೆಂಡ್ಸ್ ಕ್ಲಬ್ ನ್ನು ಕಟ್ಟಿ ಬೆಳೆಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸಮೀಪದ ಎಲ್ಲಾ ಧಾರ್ಮಿಕ ಕಾಯ೯ಕ್ರಮಗಳಲ್ಲಿ ಭಜನೆ ಸಂಕೀತ೯ನೆಯಲ್ಲಿ ಭಾಗವಹಿಸುತ್ತಾ ಜನರ ಮೆಚ್ಚುಗೆಗಳಿಸಿದ್ದರು.

ಅವ್ಯಾಸಿ ನಾಟಕ ಕಲಾವಿದರೂ, ಸುಬ್ಬಯ್ಯಕಟ್ಟೆಯಲ್ಲಿ ಸುಮಾರು 20 ವರ್ಷಗಳ ಕಾಲ ರೇಷನ್ ವ್ಯಾಪಾರಿಯಾಗಿದ್ದರು. ಇದೀಗ ಅವರು ಕೆಲವು ವರ್ಷಗಳ ಕಾಲ ಬೋವಿಕಾನ ಪರಿಸರದಲ್ಲಿ ತರಕಾರಿ ವ್ಯಾಪಾರ ನಡೆಸುತ್ತಾ ಇತ್ತೀಚೆಗೆ ಅಲ್ಲೇ ಹೊಸ ಮನೆ ನಿಮಿ೯ಸಿ ಜೀವನ ನಡೆಸುತ್ತಿದ್ದರು. ಮೃತರು ಪತ್ನಿ ಪ್ರಭಾವತಿ, ಮಕ್ಕಳಾದ ಕಾತಿ೯ಕ್ ರಾವ್, ಕೌಶಿಕ್ ರಾವ್, ಸಾತ್ವಿಕ (ಎಲ್ಲರೂ ಬೆಂಗಳೂರಿನಲ್ಲಿ ಐ.ಟಿ ಉದ್ಯೋಗಿಗಳು) ಸಹೋದರರಾದ ಅಚ್ಚುತ್ ರಾವ್ [ನಿವೃತ್ತ ಪೋಸ್ಟ್ ಮಾಸ್ಟರ್], ಚಂದ್ರಶೇಖರ ರಾವ್, ಸಹೋದರಿಯರಾದ ಗಿರಿಜಾ, ಶಾರದಾ, ಶಾಂಭವಿ, ವಿಜಯಲಕ್ಷ್ಮಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.


Share with

Leave a Reply

Your email address will not be published. Required fields are marked *