ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ನೇರ್ತನೆ ಎಂಬಲ್ಲಿ ಸೆ.12 ರಂದು ರಾತ್ರಿ ಕಾಡಾನೆಗಳು ಕಂಡು ಬಂದಿದ್ದು ಅರಣ್ಯ ಇಲಾಖೆ ಹಾಗೂ ಸ್ಥಳೀಯರು ಕಾಡಾನೆಗಳನ್ನು ಅಟ್ಟುವ ಕಾರ್ಯಾಚರಣೆ ನಡೆಸಿದ್ದು ಕೃಷಿ ಹಾನಿ ಉಂಟಾಗುವುದು ತಪ್ಪಿದೆ.
![](https://i0.wp.com/veekshakavani.com/wp-content/uploads/2023/09/New-Project-12.jpg?resize=640%2C400&ssl=1)
ಸ್ಥಳೀಯವಾಗಿ ರಾತ್ರಿ 11ರ ಸುಮಾರಿಗೆ ಕಾಡಾನೆಗಳು ತೋಟಕ್ಕೆ ನುಗ್ಗಿವುದು ಗಮನಕ್ಕೆ ಬಂದಿದೆ. ಕೂಡಲೇ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಲಾಯಿತು. ಡಿ ಆರ್ ಎಫ್ ಒ ಹರಿಪ್ರಸಾದ್,ರಾಜೇಶ್ ಗಸ್ತು ಅರಣ್ಯ ಪಾಲಕರಾದ ಸಂತೋಷ, ಸದಾನಂದ ಆಗಮಿಸಿ ಸ್ಥಳೀಯರ ಸಹಕಾರದಲ್ಲಿ ಆನೆಗಳನ್ನು ಕಾಡಿಗೆ ಅಟ್ಟಲಾಗಿದೆ. ಆನೆ ಗುಂಪಿನಲ್ಲಿ ಮರಿಯು ಇರುವ ಶಂಕೆ ವ್ಯಕ್ತವಾಗಿದೆ.