ಉಪ್ಪಳ: ಮುಳಿಂಜ ಶ್ರೀ ಮಹಾಲಿಂಗೇಶ್ವರ ಕ್ಷೇತ್ರದಲ್ಲಿ ಕಳೆದ ಐದು ದಿನಗಳಿಂದ ನಡೆಯುತ್ತಿರುವ ವರ್ಷಾವಧಿ ಜಾತ್ರಾಮಹೋತ್ಸವ ಮಾರ್ಚ್.18ರಂದು ಸಮಾಪ್ತಿಗೊಳ್ಳಲಿದೆ. ಮಾರ್ಚ್.18ರಂದು ಬೆಳಿಗ್ಗೆ ಕವಟೋದ್ಘಾಟನೆ, ಅಭಿಷೇಕ, ಮಹಾಪೂಜೆ, ಗಣಪತಿ ಹವನ, ಭಜನೆ, ತುಲಾಭಾರ ನಡೆಯಿತು.
ರಾತ್ರಿ 7.30ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, 8.30ರಿಂದ ದರ್ಶನಬಲಿ, ರಾಜಾಂಗಣ ಪ್ರಸಾದ, ಆರಾಟ ಉತ್ಸವ, ದ್ವಜಾವರೋಹಣ, ಮಹಾಮಂತ್ರಾಕ್ಷತೆ ನಡೆಯಲಿದೆ. ಜಾತ್ರೆಯ ಪ್ರಯುಕ್ತ ಮಾರ್ಚ್.19ರಂದು ಸಂಜೆ 3ರಿಂದ ಮುಳಿಂಜಗುತ್ತು ಮನೆಯಿಂದ ಭಂಡಾರ ಆಗಮನ ನಂತರ ಗುಳಿಗ ದೈವದ ಕೋಲ, 7.30ರಿಂದ ಅನ್ನಸಂತರ್ಪಣೆ ನಡೆಯಲಿದೆ.