ಜನಗಣತಿಗೆ ಬಂದ ಶಿಕ್ಷಕನಿಗೆ ನಾಯಿ ಕಡಿತ..! ಆಸ್ಪತ್ರೆ ದಾಖಲು

Share with

ಕಾಸರಗೋಡು: ಜನಗಣತಿ ಮಾಹಿತಿ ಸಂಗ್ರಹಿಸಲು ಆಗಮಿಸಿದ ತ್ರಿಕರಿಪುರ ಉಡುಂಬುಂತಲ ಜಿಎಲ್‌ಪಿ ಶಾಲೆಯ ಶಿಕ್ಷಕ ಕೆ.ಎಂ. ಮುಹಮ್ಮದ್ ಕಬೀರ್ ಅವರಿಗೆ ಮನೆಯೊಂದರ ಸಾಕು ನಾಯಿ ಕಚ್ಚಿದೆ.

ದಕ್ಷಿಣ ತ್ರಿಕರಿಪುರ ತಳಿಚಳದಲ್ಲಿ ಶುಕ್ರವಾರ ಈ ಘಟನೆ ನಡೆದಿದೆ. ಬೆಳಗ್ಗೆಯಿಂದ ಸುಮಾರು 30 ಮನೆಗಳಿಂದ ಮಾಹಿತಿ ಸಂಗ್ರಹಿಸಿದ ನಂತರ ಮುತ್ತಪ್ಪನ್ ದೇವಸ್ಥಾನ ಸಮೀಪ ಮನೆಗೆ ದತ್ತಾಂಶ ಸಂಗ್ರಹಿಸಲು ಬಂದಾಗ ಅವರನ್ನು ನಾಯಿ ಕಚ್ಚಿದೆ.

ಶಿಕ್ಷಕನು ಪ್ರಶ್ನಾವಳಿ ಮತ್ತು ಫೈಲ್‌ಗಳನ್ನು ಕೈಯಲ್ಲಿ ಹಿಡಿದುಕೊಂಡು ಮನೆಯ ಮುಂಭಾಗದ ಬಾಗಿಲನ್ನು ಪ್ರವೇಶಿಸಿದಾಗ ನಾಯಿಯೊಂದು ಅವರ ಕಾಲಿಗೆ ಕಚ್ಚಿತು ಎನ್ನಲಾಗಿದೆ. ನಂತರ ಅವರಿಗೆ ತ್ರಿಕರಿಪುರ ತಾಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕಿಟ್ ನೀಡಲಾಯಿತು. ಅನಂತರ ಅವರನ್ನು ಕಣ್ಣೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು.


Share with

Leave a Reply

Your email address will not be published. Required fields are marked *