ಭೀಕರ ಅಪಘಾತದಲ್ಲಿ ಗಣೇಶ್‌ ಬೀಡಿ ಕಂಟ್ರಾಕ್ಟರ್‌ ಮೊಮ್ಮಗಳು ಮೃತ್ಯು

Share with

ಪುತ್ತೂರು: ಪುತ್ತೂರಿನಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಐ20 ಕಾರು ತುಂಬೆಯಲ್ಲಿ ಅಪಘಾತಕ್ಕೀಡಾಗಿ ವಿದ್ಯಾರ್ಥಿನಿಯೋರ್ವಳು ಮೃತಪಟ್ಟ ದುರ್ಘಟನೆ ಜು.06ರಂದು ನಡೆದಿದೆ.

ಕಾರು ಅಪಘಾತ

ಮಂಗಳೂರಿನ ಖಾಸಗಿ ಕಾಲೇಜಿನ ವಿದ್ಯಾರ್ಥಿನಿ, ಪುತ್ತೂರಿನ ಕೂರ್ನಡ್ಕ ನಿವಾಸಿ ಅಬ್ದುಲ್ ಮಜೀದ್ ಹಾಗೂ ಶಮೀಮಾ ದಂಪತಿ ಪುತ್ರಿ ಹನಾ (19) ಮೃತಪಟ್ಟವರು. ಇವರು ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಬಿಬಿಎಂ ವಿದ್ಯಾರ್ಥಿನಿಯಾಗಿದ್ದು, ಪುತ್ತೂರಿನಿಂದ ಮಂಗಳೂರು ಕಡೆಗೆ ಐ20 ಕಾರಿನಲ್ಲಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ‌.

ಚಾಲಕನ ನಿಯಂತ್ರಣ ತಪ್ಪಿದ ಕಾರು, ಪಲ್ಟಿಯಾಗಿ ಅಪಘಾತಕ್ಕೀಡಾಗಿದೆ. ಮೃತಪಟ್ಟ ಹನಾ ಅವರು ಕೂರ್ನಡ್ಕದ ಗಣೇಶ್ ಬೀಡಿ ಕಾಂಟ್ರಾಕ್ಟರ್ ಆಗಿರುವ ಸೀದಿಕುಂಞ ಹಾಜಿಯವರ ಮೊಮ್ಮಗಳು.


Share with

Leave a Reply

Your email address will not be published. Required fields are marked *