ಮಂಗಳೂರಿನ ವ್ಯಾಪಾರಿಗೆ ಸೋಲಾಪುರದ ವ್ಯಾಪರಿಯಿಂದ ವಂಚನೆ: ಪ್ರಕರಣ ದಾಖಲು

Share with

ಮಂಗಳೂರಿನ ವ್ಯಾಪಾರಿಗೆ ಸೋಲಾಪುರದ ಈರುಳ್ಳಿ ವ್ಯಾಪಾರಿಯಿಂದ 75 ಲಕ್ಷ ರೂಪಾಯಿ ವಂಚನೆ.

ಮಂಗಳೂರು: ಮಂಗಳೂರಿನ ವ್ಯಾಪಾರಿಗೆ ಸೋಲಾಪುರದ ಈರುಳ್ಳಿ ವ್ಯಾಪಾರಿಯೋರ್ವ 75 ಲಕ್ಷ ರೂಪಾಯಿ ವಂಚಿಸಿರುವ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರಿನ ಅಬ್ದುಲ್‌ ರಹಿಮಾನ್‌ ಬಾವಾ ವಂಚನೆಗೊಳಗಾದ ವ್ಯಕ್ತಿಯಾಗಿದ್ದು, ಅವರಿಗೆ ಕೃಷಿ ಉತ್ಪನ್ನಗಳ ವ್ಯವಹಾರಗಳ ಮೂಲಕ 2021ರಲ್ಲಿ ಮಂಗಳೂರು ಮತ್ತು ಚೆನ್ನೈಯಲ್ಲಿ ಈರುಳ್ಳಿ ವ್ಯಾಪಾರ ಮಾಡುವ ಮಹಾರಾಷ್ಟ್ರ ಸೋಲಾಪುರದ ಕುಂಡಲಿಕ್‌ ಜುಂಬಾರ್‌ ಖಂಡಾಗಲೆ ಎಂಬಾತನ ಪರಿಚಯವಾಗಿದ್ದು ನಂತರ ಆತ್ಮೀಯರಾಗಿದ್ದರು. ಅನಂತರ ಕುಂಡಲಿಕ್‌ ಜುಂಬಾರ್‌ ಖಂಡಾಗಲೆ ವ್ಯವಹಾರದಲ್ಲಿ ಒಳ್ಳೆಯ ಹೂಡಿಕೆ ಅವಕಾಶ ಇದೆ ಎಂಬುದಾಗಿ ನಂಬಿಸಿ ಅಬ್ದುಲ್‌ ರಹಿಮಾನ್‌ ಬಾವಾ ಅವರಿಂದ 75 ಲಕ್ಷ ರೂಪಾಯಿಗಳನ್ನು ವರ್ಗಾಯಿಸಿಕೊಂಡು ಅನಂತರ ವಾಪಸ್‌ ನೀಡದೆ ವಂಚಿಸಿದ್ದಾನೆ ಎಂದು ಪ್ರಕರಣ ದಾಖಲಾಗಿದೆ.


Share with

Leave a Reply

Your email address will not be published. Required fields are marked *